Tuesday, January 11, 2011

ಕೆರೆಯ ಅಂಚಿನಲಿ

ಕೆರೆಯ ಅಂಚಿನಲಿ ನಿಂತ ಚೆಲುವೆ ಯಾರೆ ನೀನ್ಯಾರೆ?
ಬೆಳಗಿನ ಬಂಗಾರದ ಕಿರಣಗಳನ್ನು ಹೊತ್ತು ತಂದವಳು ನೀನಾದೆ
ಸಹಿ ಗಾಳೀಯ ಸೀರೆ ಸೆರಗಿನಲಿ ಕಟ್ಟಿ ಹಾಕಿದವಳು ನೀನಾದೆ
ಯಾರೆ, ನೀನ್ಯಾರೆ?

ಕೆರೆಯ ಸಾವಿರಾರು ಕಮಲಗಳು ನಿನ್ನೆರೆಡು ಅರಳಿದ ಕಮಲ
ಕಣ್ಣ್‌ಗಳನು ನೋಡಿ ನಾಚಿ ಅರಳದೆ ನಿಂತವು ಮೊಗ್ಗಾಗಿ
ಆ ನಿನ್ನ ಮುಂಗುರುಳು ಮೆಲ್ಲಗೆ ಹೋಯ್ಯ್‌ದಾಡಲು
ಸೋತು ತೂಕಡಿಸಿದವು ಮರದ ಹಕ್ಕಿಗಳು
ಕೆರೆಯ ಅಂಚಿನಲ್ಲಿ ಬಂದು ನಿಂತ ನೀರೇ
ಯಾರೆ, ನೀನ್ಯಾರೆ?

ಅತ್ತಿಂದಿದ್ದ ನೀ ನಡೆದು ಬರಲು ಕೆರೆಯ
ಹಂಸಗಳು ಲಜ್ಜೆಯಿಂದ ಕಾದು ನಿಂತವು ಹೆಜ್ಜೆ ಹಾಕಲು
ನಿನ್ನ ಆ ಕೈ ಬೆರಳುಗಳು ಕೆರೆಯ ನೀರಿಗೆ ಸೋಕಲು
ಮೈಜೂಂ ಎಂದು ಮಂಜುಗಟ್ಟಿದವು ಮೈಮರೆದು
ಯಾರೆ, ನೀನ್ಯಾರೆ?

ನನ್ನ ನೆರಳು ನನ್ನ ಬಿಟ್ಟು

ನನ್ನ ನೆರಳು ನನ್ನ ಬಿಟ್ಟು | ನಿನ್ನ ಹಿಂದೆ ಹೊದಂತೆ ಕಂಡೆ
ಈ ಹ್ರದಯ ಆ ನೆರಳ ಹಿಂದೆ ಓಡಿದಂತೆ | ನಾ ಬರಿದಾದಂತೆ ಕಂಡೆ

ಭೂಮಿ ತನ್ನ ಸುತ್ತ ಬಿಟ್ಟು | ನಿನ್ನ ಹಿಂದೆ ಸುತ್ತಿದಂತೆ ಕಂಡೆ
ನವ ವಸಂತದ ಚುಗುರಿದ ಎಲೆಗಳೆಲ್ಲ | ನಿನಗೆ ಮಾತ್ರ ತಂಗಾಳಿ ಬೀಸಿದಂತೆ ಕಂಡೆ
ಸಂಪಿಗೆಯ ಮರದ ಕೋಗಿಲೆಯು ನಿನಗೆ ಮಾತ್ರ ಕೇಳುವಂತೆ | ಹಾಡಿದ ಇಂಪನ್ನು ಕಂಡೆ

ಕಾಲ ಮುಂದೆ ಸರಿಯುವದು ಬಿಟ್ಟು | ನಿನ್ನ ಯೌವನವ ತಡೆದಂತೆ ಕಂಡೆ
ಆ ಕಾಮನ ಬಿಲ್ಲಿನ ಬಣ್ಣ ನಿನಗೆ ಕೊಟ್ಟು | ತಾನೂ ಬರಿದಾದಂತೆ ಕಂಡೆ

ಮೂವರೂ ಮಕಾಡೆ ಮಲಗಿದರು

ದುಡ್ಡೇ ದೊಡ್ಡಪ್ಪ ಎಂದ ದೊಡ್ಡಪ್ಪ
ದುಡ್ಡು ಕೂಡಿಟ್ಟರೆ ಕಳ್ಳ ಕಾಕರ ಭಯ | ನೆಲವೆ ದುಡ್ಡು ಅಂದ ಅಪ್ಪ
ಕೂಡಿಟ್ಟರೇನೂ ಬಂತು ಸುಖ ಮುಖ್ಯ | ಎಂದ ಮಗ ಹೆಣ್ಣಿನ ಮೊರೆ ಹೊಕ್ಕ

ದೊಡ್ಡಪ್ಪ ಕೂಡಿಟ್ಟ ಕೊಪ್ಪರಿಗೆ ಹೊನ್ನು | ತುಂಬಿದ ಹಿತ್ತಾಳೆ ಬಿಂದಿಗೆ
ಹಿತ್ತಲನ್ನೂ ಬಿಡದಂತೆ | ಗಳಿಗೆ ತುಂಬಿಟ್ಟ ಬಿಡದಂತೆ

ಅಪ್ಪ ಹೊಲಕ್ಕೆ ಹೊಲ ಸೇರಿಸಿದ | ಬೇಲಿ ಪಕ್ಕಕ್ಕೆ ಸರಿಸಿದ
ಊರಿನ ಹೊಲಗಳೆಲ್ಲ | ತನ್ನ ಒಂದೇ ಧೋತರದಲ್ಲಿ ಕಟ್ಟಿಟ್ಟ

ಅತ್ತ ಮಗ, ಮಾನಿನಿಯರ ಹಿಂದೆ ಬಿದ್ದ | ಹಗಲಿರುಳು ಎನ್ನದೇ ರಮಿಸಿದ
ಸಾವಿರ ಹೆಣ್ಣಿನ ಸರದಾರ ಎನಿಸಿದ | ಎಡೆಬಿಡದೇ ದಣಿಯದೆ

ಮುಂದೊಂದು ದಿನ ದೂರದೂರಿಂದ ಕಾಲ ಬಂದ | ಮೂವರಿಗೂ ಅಪ್ಪಣೆ ತಂದ ಹೊರಡಲು

ಕುಪ್ಪರಿಗೆ ಹೊನ್ನಿನ್ನ ದೊಡ್ಡಪ್ಪ ಕುಣಿಗೆ ಹೋಗುವಾಗ | ಅವನ ಮೇಲಿತ್ತು ಎಂಟಾಣೆ ಹೂವಿನ ಮಾಲೆ
ಅವನ ಮೇಲಿಂದ ಗಾಳಿಯಲ್ಲಿ | ತೂರಿಬಂದವು ನಾಕಾಣೆ ಚುರುಮುರಿಗಳೂ

ಅಪ್ಪನಿಗೆ ಕಾದಿತ್ತು ಮೂರಡಿ ಆರಡಿ ನೆಲ | ಅವನು ಮಾಡಿಟ್ಟ ಧೊಡ್ಡ ಹೊಲದಲ್ಲಿ
ಮಗನು ಕುಣಿಗೆ ಹೋಗುವಾಗ ಹಿಂದೆ | ಬಂದವರೆಲ್ಲ ಗಂಡಸರೇ ಆಗಿದ್ದರು


ಆ ಮೂರೂ ಆತ್ಮಗಳೀಗೆ ಕಿವಿ ಬಾಯಿ ಇದ್ದರೆ | ಅನ್ನುತ್ತಿದ್ದವು
ಮೂವರೂ ಮಕಾಡೆ ಮಲಗಿದೆವೆಂದು

Monday, January 10, 2011

ಚನ್ನ್‌ಪಟ್ಣದ ಚಂದದ ಗೊಂಬೆ

ಓ ಚೆನ್ನಯ್ಯ ನೋಡಯ್ಯ | ಓ ಮಲ್ಲಯ್ಯಾ ಏಳಯ್ಯಾ | ಓ ಕಲ್ಲಯ್ಯಾ ಕೇಳಯ್ಯಾ
ಚನ್ನ್‌ಪಟ್ಣದ ಚಂದದ ಗೊಂಬೆ ನಾನೂ | ಬಲು ಅಂದದ ದಂತದ ಬೊಂಬೇ ನಾನೂ... ||ಪ||

ಮಾಯದಲೋಕದಿಂದ ಬಂದ ಬೊಂಬೆ ನಾನೂ | ರಂಭೆಯನ್ನೂ ಮೀರೂವಾ ರೂಪವನ್ನು ತಂದೆ ನಾನೂ
ಬಿಟ್ಟರೇ ಸಿಕ್ಕದು ಇಂಥದೊಂದು | ಪಟ್ಟದ ರಾಣಿ ಮಾಡಿಕೋ ಈ ಬೊಂಬೆಯನ್ನು ||೧||

ತಾಳಕ್ಕೆ ಸೊಗಸಾಗಿ ಹೆಜ್ಜೆ ಹಾಕೋ ಬೊಂಬೆಯಿದು | ರಾಗವೇ ಮೆಚ್ಚುವಂತೆ ಹಾಡೋ ಬೊಂಬೆಯಿದು
ಮೈಸೂರು ದಸರೆಯಲ್ಲಿ ಮೆರೆದ ಬೊಂಬೆ ನಾನೂ | ಮನ ಸೂರೂ ಮಾಡುವ ಚಿನ್ನದ ಪುಥಳೀ ನಾನೂ ||೨||

ಕಿನ್ನರ ಲೋಕದ ಬೊಂಬೆ ನಾನೂ | ನಿನ್ನ ಕಣ್ಣಿನ ಕನಸಾಗಿ ಬಂದೇ ನಾನೂ
ಸಿರಿ ಗಂಧದ ಪರಿಮಳ ಬೀರೂವಾ ಬೊಂಬೆ ನಾನೂ | ಮಲ್ಲಿಗೆಯ ನಗುವನ್ನು ಚೆಲ್ಲುವ ಬೊಂಬೆ ನಾನೂ
ರಾಜರ ದರ್ಬಾರಿನ ನರ್ತಕೀ ನಾನೂ | ನಿನಗಾಗಿ ಅರಸಿ ಬಂದೇ ಇಲ್ಲಿ ಇಂದು ನಾನೂ ||೩||

ಖೆಡ್ಡಾಕ್ಕೆ ಬಿದ್ದೆ ನಾನೂ ಮದುವೆ ಎಂಬ ಖೆಡ್ಡಾಕ್ಕೆ

ಅಂದು ನಡೆದಿತ್ತು ಮನೆಯಲ್ಲಿ ಸಡಗರ | ತುಂಬಿತ್ತು ನನ್ನಲ್ಲಿ ನಾನರಿಯದ ದುಗುಡ
ಗುರು ಹಿರಿಯರ ಸಮ್‌ಮುಖದಲ್ಲಿ | ವಧು ಪರೀಕ್ಷೇಗೆ ಸಮಯ ಕೂಡಿಬಂದಿತ್ತು

ದೂರದೂರಿಂದ ಬಂದಳು ಜರತಾರಿ ಸಿರೆಯುಟ್ಟ ನವ ವಧು | ನೀಳಜಡೆಯಲ್ಲಿ ಮಲ್ಲಿಗೆ ಮೊಗ್ಗುಗಳು
ಹಣೆಯಲ್ಲಿ ಹೊಳೆವ ಕುಂಕುಮ | ಅದರ ಮೇಲೇ ಬೆವರಿನ ಮುತ್ತು
ಮೆಲ್ಲನೆ ನಡೆದು ಬಂದು ನಗೆ ಬಿರಿ | ತೊರಿದಳು ಹೊಳೆವ ದಂತಪಂಕ್ತಿಯ
ಅದ ನೋಡಿ ನಾಚಿ ಮೋಡದಲಿ | ಅಡಗಿ ನಿಂತವು ಬಾನಿನ ತಾರೆಗಳು

ಅಂದು ಗುರುಗಳು ಬರೆದೇ ಬಿಟ್ಟರು | ಪಂಚಾಂಗವನ್ನು ನನ್ನ ಅರಳಿದ ಮುಖನೋಡಿ
ಅಂಗಳದಲ್ಲಿ ನಿಂತು ನೋಡಿದ | ಅಂಗನೆಯರು ಉಲಿದರು ಭಲೇ ಜೋಡಿಯೆಂದು
ಹುರಿದುಂಬಿಸಿದರು ಎನ್ನ | ಮದುವೆ ಎಂಬ ಖೆಡ್ಡಾಕ್ಕೆ ಕೆಡುವಲು

ಅಂದು ನಡೆಯಿತು ಎನ್ನ ಮೆರವಣಿಗೆ | ಶ್ವೇತವರ್ಣದ ಕುದುರೆಯ ಮೇಲೇ
ಗಟ್ಟಿಮೇಳದ ಸದ್ದಿನಲ್ಲಿ ಮಂತ್ರ | ಘೋಷಗಳ ನಡುವೆ ನಡೆಯಿತು ಮದುವೆ
ಬಂಧು ಮಿತ್ರರು ಬಂದು ಶುಭ ಕೋರಿದರು | ಉಂಡು ಸವಿದರು ಸಿಹಿ ಊಟವ

ಆಗಲೇ ಖೇಡ್ಡಾಕ್ಕೆ ಬಿದ್ದವರು | ಎಂದರು "ನೀನೂ ನಮ್ಮಂತೆ"
ಇನ್ನೂ ಉಳಿದವರು ಎಂದರೂ | ನಾವು ನಿಮ್ಮ ಹಿಂದೆ
ಒಟ್ಟಿನಲ್ಲಿ ಹೆಮ್ಮೆ ಪಟ್ಟೆ | ನಾನೂ ಎಲ್ಲರಂತೆ

ಅಂದು ರಾತ್ರಿ ಎನ್ನ ಹೆಂಗಸರು | ಛೇಡಿಸುತ್ತ ಕಾಡಿಸುತ್ತ
ಕುಳಿಸಿದರು ಹೂ ಹಾಸಿದ | ಮೆತ್ತನೆ ಮಂಚದ ಮೇಲೇ
ಮೂಲೆಯಲಿ ಮಿಣುಕು ದೀಪ | ಹೋಯ್‌ದಾಡುತ್ತ ಉಯ್ಯಾಲೆಯಾಗುತ್ತಿರಲು
ತಟ್ಟೆ ಹಣ್ಣುಗಳೂ ತನ್ನ | ಸರದಿಗಾಗಿ ಕಾಯುತ್ತಿರಲು ತವಕದಿಂದ
ಹುಣ್ಣಿವೆ ಬೆಳದಿಂಗಳಂತೆ | ತೇಲಿ ಬಂದಳು ನನ್ನವಳು

ಸುಮಂಗಲೆಯರು ಸವಿಗಾನದಿಂದ ಆರತಿ ಎತ್ತಿ | ಬಿಡಿಸಿದರು ನನ್ನಿಂದಾಗದ ವಗಟವನು
ಕದ ಮುಚ್ಚಿ ವಧುವಿನ ಕಿವಿಯಲ್ಲಿ ಉಸುರಿ | ಕಿಲ ಕಿಲ ನಗುತ್ತ ಮಾಯವಾದರು ಅಲ್ಲಿಂದ
ಅಲ್ಲಿಯವರೆಗೆ ಉಯ್ಯಾಲೆವಾಡಿ ದಣಿದಿದ್ದ | ಮಿಣುಕು ದೀಪ ಮಂದವಾಗಲೂ
ನಿಜ ಅರಿವಾಯಿತೆಂದು ನನನೆ | ಮದುವೆಯೆಂಬ ಖೆಡ್ಡಾದಲ್ಲಿ ಬಿದ್ದ ಸುಖ

Sunday, January 9, 2011

ಅಣು ಅಣುವಿನಲ್ಲಿ ಕಂಡೆ ಕನ್ನಡ

ಅಣು ಅಣುವಿನಲ್ಲಿ ಕಂಡೆ ಕನ್ನಡ | ಅನುದಿನ ಪಾಡಿದೆ ಕನ್ನಡ
ತನು ಮನದೆನ್ನ ಕನ್ನಡ | ಸವಿ ನುಡಿಯ ಹೆಜ್ಜೇನ ಮಧುರ ಕನ್ನಡ ||ಪ||

ಕವಿ-ರಾಜಮಾರ್ಗದಲ್ಲಿ ನಡೆದು ಬಂದ ಕನ್ನಡ | ಹಲ್ಮಡಿ ಶಾಸನದಲ್ಲಿ ಮೂಡಿದ ಮೊದಲ ಕನ್ನಡ
ಕವಿ ಕಲ್ಪನೆ ಮೀರಿದ ಕನ್ನಡ | ಗೌರೀಶಿಖರದ ಮೇರು ಕನ್ನಡ
ರತ್ನತ್ರಯರಲ್ಲಿ ಹೊಳೆದ ಕನ್ನಡ | ವಿಜಯನಗರದಲ್ಲಿ ಮೆರೆದ ಕನ್ನಡ ||೧||

ನಾಕು ತಂತಿ ಮೀಟಿ ರಾಗವ ತಂದ ಕನ್ನಡ | ಮೈಸೂರು ಮಲ್ಲಿಗೆಯು ಪಸರಿಸಿದ ಕಂಪು ಕನ್ನಡ
ರಾಮಾಯಣ ದರುಶನವಿತ್ತ ಕನ್ನಡ | ಮಾಹಾಭಾರತ ವೈಭವ ತೋರಿದ ಕನ್ನಡ
ಮೂಕಜ್ಜಿಯ ಕನಸುಗಳಲ್ಲಿ ಕಂಡ ಕನ್ನಡ | ಮರಳಿ ಮಣ್ಣಿನ ಕಂಪು ಸೂಸಿದ ಕನ್ನಡ ||೨||

ದಾಸರು ಹಾಡಿ ಹರಿಯ ಕಂಡ ಕನ್ನಡ | ಶಿವ ಮೆಚ್ಚಿದ ಶರಣರ ವಚನ ಕನ್ನಡ
ಪ್ರಜ್ಞ ಮೂಡಿಸಿದ ಸರ್ವಜ್ಞನ ಕನ್ನಡ | ತಾಯಿಗೆ ನಿತ್ಯೋತ್ಸವ ಮಾಡಿದ ನಿತ್ಯ ಕನ್ನಡ
ಸಪ್ತ ಜ್ನಾನಪೀಠ ಆವರಿಸಿದ ಕನ್ನಡ | ಸಪ್ತ ಸ್ವರಗಳಲ್ಲಿ ಶಾರಧೆಯ ಕನ್ನಡ ||೩||

ಮಗುವಿನ ಕಿರು ನೆಗೆಯಲ್ಲಿ ಅರಳಿದ ಸಿಶು ಕನ್ನಡ | ತಾಯಿಯ ಮಮತೆಯಲ್ಲಿ ಬೆಳೆದ ಕನ್ನಡ
ಹಕ್ಕಿಗಳ ಕಲರವದಲ್ಲಿ ಕೇಳೀದ ಇಂಪು ಕನ್ನಡ | ಝರೀ ನೀರಲ್ಲಿ ಕೇಳೀದ ಮಂಜುಳ ಗಾನ ಕನ್ನಡ
ಜೋಗದ ಗುಂಡಿಯ ಸದ್ದಿನಲ್ಲಿ ಗಂಡೆದೆಯ ಕನ್ನಡ | ದುಂಬಿಯ ಝೇಂಕಾರದಲ್ಲಿ ಮೆಲ್ಲನೆಯ ಕನ್ನಡ ||೪||

ನುಡಿಯೆನ್ನ ಕನ್ನಡ | ನಡೆಯೆನ್ನ ಕನ್ನಡ | ಉಸಿರೆನ್ನ ಕನ್ನಡ | ಎಂದೆಂದಿಗೂ ಅಮರ ಈ ಕನ್ನಡ ||

Wednesday, February 24, 2010

ಕಿಟ್ಟ ಮಾತಾಡಿ ಕೆಟ್ಟ : ಭಾಗ - ೧

ಮನೆಯಲ್ಲಿ ನನ್ನ ಪಾಡಿಗೆ ನಾನು ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ೩ ವರುಷದ ಮಗಳು ಹಾಲ್ ನಲ್ಲಿ ಆಟಿಕೆಗಳೋಂದಿಗೆ ಆಡುತಿದ್ದಳು. ಮಡದಿ ಯಥಾರೀತೀ ಅಡುಗೆ ಮನೆಯಲ್ಲಿ ಅಡಗಿದ್ದಳು. ಒಟ್ಟಿನಲ್ಲಿ ಎಲ್ಲವೂ ತನ್ನಪಾಡಿಗೆ ತಾನು ಎಂಬಂತೆ ದೇವರ ಆಟ ನಡೆದಿತ್ತು. ಬಹುಷಹ ದೇವರಿಗೆ ಬೋರ್ ಆಯಿತು ಅಂತ ಕಾಣುತ್ತೆ. ಒಂದು ಗುಗ್ಲೀ ಎಸೇದ.
ನನ್ನ ಮಗಳು ಎಲ್ಲಾ ಆಟಿಗೆ ಸಾಮಾನುಗಳನ್ನು ಹಾಲ್ ತುಂಬೆಲ್ಲ ಎಸೆಯತೊಡಗಿದಳು. ಏರಡೇ ನಿಮಿಷ ಅಸ್ಟೇ, ಹಾಲ್ ಆಟಿಗೆಯಿಂದ ತುಂಬಿಹೋಯಿತು.
ಅಷ್ಟರಲ್ಲಿ, ಅಡುಗೆ ಮನೆಯಿಂದ ಮಾತು ಕೇಳಿಸತೋಡಗಿದವು. ಅಸ್ಪಸ್ಟವಾಗಿದ್ದರು, ಏನು, ಯಾಕೆ ಅನ್ನೊದು ಗೋತ್ತಾಗುವಷ್ಟು ದೇವರು ತಲೆಯಲ್ಲಿ ಬುದ್ದಿ ಕೊಟ್ಟಿದ್ದ, ಹಾಗೆಯೇ, ಶರೀರದಲ್ಲಿ ಆಲಶ್ಯವನ್ನೂ ಕೊಟ್ಟಿದ್ದಕ್ಕಾಗಿ, ಮೌಸ್ ಮೇಲೆ ಕೈಯಾಡಿಸುತ್ತ ಕೂತೆ.
ಈಗ ಮಾತುಗಳು ಸ್ಪಸ್ಟವಾಗಿ ಕೇಳ ಹತ್ತಿದವು. ನನ್ನವಳು ಅಡುಗೆ ಮನೆಯಿಂದ ಹಾಲ್ ಗೆ ಬಂದಳೆಂದು ಕಾಣುತ್ತೆ.
"ಏಸ್ಟು ಹೇಳಿದರೂ ಅಸ್ಟೇ, ಯಾವಗಲೂ ಶಿಸ್ತು ಇಲ್ಲಾ, ಏಲ್ಲಿಬೇಕಾದಲ್ಲಿ ಏಸಿಯೋದು, ಸ್ವಲ್ಪೂ ನೀಟಾಗಿ ಇಡೋದಿಲ್ಲ.." ನನ್ನವಳ ದ್ವನಿ ಏರತೋಡಗಿತು. ಆದರೇ ನನ್ನ ಮಗಳು ಏನು ಕೇಳಿಸಿಲ್ಲ ಅನ್ನುವಂತೆ, ಆಟಿಗೆ ಸಾಮಾನುಗಳನ್ನು ಎತ್ತಿ ಬೀಸಾಕುತ್ತಿದ್ದಳು.
ನನ್ನವಳ ದ್ವನೀ ಇನ್ನೂ ಜೋರಾಯಿತು, "ಒಂದು ಸಾವಿರ ಸಾರಿ ಹೇಳಿದ್ದೀನೀ, ಅಂದರೂ ಇನ್ನೂ ಹಂಗ ಇದ್ದೀ..."
ದೇವರು ಗಂಡಸರೀಗೆ, ಕಣ್ಣು ರೆಪ್ಪೇಗಳ ಹಾಗೆ ಕಿವಿ ಮುಚ್ಚುವಂತ ಕಿವಿರೆಪ್ಪೆ ಕೊಟ್ಟಿದ್ದರೆ? ..ಹುಚ್ಚು ಯೋಚನೆಯೊಂದು ತಲೆಯಲ್ಲಿ ಸುಳಿಯಿತು...
ಭಗವಂತ ಈ ಸಾರಿ "ದೂಸ್ರಾ" ಎಸೆದಾ...
ನಾನು, ನನ್ನವಳಿಗೆ, "ನೀ ಎಷ್ತು ಹೇಳಿದರೂ, ನಿನ್ನ ಮಗಳು ಏನು ಕೇಳದಂಗ ಯಾಕ ಕೂತಾಳ ಹೇಳು ನೋಡಣ" ಅಂದೆ.
ಅದಕ್ಕೆ ನನ್ನವಳು ಯಾಕೇ ಅಂತ ಹುಬ್ಬು ಮೇಲಕ್ಕೇರಿಸಿ ಕೇಳಿದಳು ಮಾತಾಡದೆ.
"ಆ ಮಾತು ಯಾವತ್ತಿಗೂ ನನಗ ಅಲ್ಲನೂ ನೀ ಹೇಳೋದು? ಅದಕ್ಕ ಅಪ್ಪನೀಗೆ ಆ ಮಾತುಗಳು ಅಂತ ಅಂದಕೋಂಡಾಳ", "ನೀನು, ಮುಂದಿನಸಾರಿ ಬಯ್ಯುವ ಮುಂದ, ಹೆಸರು ಹೇಳಿ ಬಯ್ಯಿ ಅಂದರ ಗೊತ್ತಾಗದತ.."
ಅಸ್ಟೆ. ನನ್ನವಳ ಸೂಜಿ ಮಲ್ಲಿಗೆಯ ಕಣ್ಣು, ಅಗ್ಗಿಸ್ಟಿಗೆಯ ಕೆಂಡಮಂಡಲವಾಯಿತು. ಸೀದಾ ನನ್ನ ಹತ್ತಿರಕ್ಕೆ ಬಂದಳು.
ಅಯ್ಯೋ ಭಗವಂತಾ, "ಕಿಟ್ಟ ಮಾತಾಡಿ ಕೆಟ್ಟ" ಅಂದುಕೊಂಡೆ, ಮುಂದಿನ ಅನಾಹುತಗಳಿಗೆ ಕಾರಣಭೂತನಾದೆ.
--**--